Kalpavriksha KamadhenuValuable information on Hindu Festivals, Slokas, Prayers, Dasara Songs, Vegetarian cooking, and many other relevant topics can be found here.
Nirillada bhavi urillada mathavu neralillada mara phalavillada late dhanavillada data dayavillada natha manasillada sakuti bhayavillada bhakuti narahari mukunda srikrsna ennada narariddu phalavenu illadiddare enu ||
ava janumada tayi ava janumada tande ava janumada sati avajanumada sutaru ava janumada bandhu ava janumada balaga ava janumada pinda avange janisuvevo ni volidu palisai sirikrsnaraya||
ಗುರು ಉಪದೇಶವಿಲ್ಲದ ಜ್ಞಾನವು ಗುರು ಉಪದೇಶವಿಲ್ಲದ ಸ್ನಾನವು ಗುರು ಉಪದೇಶವಿಲ್ಲದ ಧ್ಯಾನವು ಗುರು ಉಪದೇಶವಿಲ್ಲದ ಜಪವು ಗುರು ಉಪದೇಶವಿಲ್ಲದ ತಪವು ಗುರು ಉಪದೇಶವಿಲ್ಲದ ಮಂತ್ರ ಗುರು ಉಪದೇಶವಿಲ್ಲದ ತಂತ್ರ ಉರಗನ ಉಪವಾಸದಂತೆ ಕಾಣಿರೋ ಗುರು ವ್ಯಾಸರಾಯನ ಕರುಣದಿಂದಲಿ ಎನಗೆ ಪುರಂದರವಿಠ್ಠಲನೇ ಪರನೆಂದರುಹಿ ದುರಿತಭಯವೆಲ್ಲ ಪರಿಹರಿಸಿದನಾಗಿ ವರ ಮಹಾಮಂತ್ರ ಉಪದೇಶಿಸಿದನಾಗಿ ವರ ಮಹಾಮಂತ್ರ ಉಪದೇಶಿಸಿದನಾಗಿ ॥ 2 ॥
ರೂಪಕತಾಳ
ಅಂಕಿತವಿಲ್ಲದ ದೇಹ ನಿಷೇಧ ಅಂಕಿತವಿಲ್ಲದ ಕಾವ್ಯ ಶೋಭಿಸದು ಅಂಕಿತವಿಲ್ಲದಿರಬಾರದೆಂದು ಚ – ಕ್ರಾಂಕಿತವನ್ನು ಮಾಡಿ ಎನ್ನಂಗಕ್ಕೆ ಪಂಕಜನಾಭ ಪುರಂದರವಿಠ್ಠಲನ್ನ ಅಂಕಿತ ಎನಗಿತ್ತು ಗುರುವ್ಯಾಸ ಮುನಿರಾಯಾ ಎನಗಿತ್ತು ಗುರುವ್ಯಾಸ ಮುನಿರಾಯಾ ॥ 3 ॥
ಝಂಪೆತಾಳ
ನ್ಯಾಯಾಮೃತ ತರ್ಕತಾಂಡವ ಚಂದ್ರಿಕೆ ಮೊದಲಾದ ನ್ಯಾಯ ಗ್ರಂಥವ ರಚಿಸಿ ತನ್ನ ಭಕ್ತರಿಗಿತ್ತು ಮಾಯಾವಾದಿ ಮೊದಲಾದ ಇಪ್ಪತ್ತೊಂದು ಕುಭಾಷ್ಯಕ ಬಾಯಿ ಮುದ್ರಿಸಿದ ಮಧ್ವರಾಯರ ಕರುಣದಿಂದ ಶ್ರೀಯರಸ ಪುರಂದರವಿಠ್ಠಲನ್ನ ದಾಸರೊಳು ನಾಯಕನೆಂದೆನಿಸಿ ಗುರುವ್ಯಾಸ ಮುನಿರಾಯ ನಾಯಕನೆಂದೆನಿಸಿ ಗುರುವ್ಯಾಸ ಮುನಿರಾಯ ॥ 4 ॥
ತ್ರಿವಿಡಿತಾಳ
ಶೇಷಾವೇಶ ಪ್ರಹ್ಲಾದನವತಾರವೆನಿಸಿದೆ ವ್ಯಾಸರಾಯನೆಂಬೊ ಪೆಸರು ನಿನಗಂದಂತೆ ದೇಶಾಧಿಪಗೆ ಬಂದ ಕುಹಯೋಗವನು ನೂಕೀ ನೀ ಸಿಂಹಾಸನವೇರಿ ಮೆರೆದೆ ಜಗವರಿಯೆ ವ್ಯಾಸಾಬ್ಧಿಯನು ಬಿಗಿಸಿ ಕಾಶೀದೇಶದೊಳಗೆಲ್ಲ ಭಾಸುರ ಕೀರ್ತಿಯನು ಪಡೆದೆ ನೀನು ಗುರುರಾಯ ವಾಸುದೇವ ಪುರಂದರವಿಠ್ಠಲನ್ನ ದಾಸರೊಳು ಲೇಶ ನಿನ್ನಂತೆ ವೆಗ್ಗಳರ ಕಾಣೆನು ನಾನು ವಾಸುದೇವ ಪುರಂದರವಿಠ್ಠಲನ್ನ ದಾಸರೊಳು ಲೇಶ ನಿನ್ನಂತೆ ವೆಗ್ಗಳರ ಕಾಣೆನು ನಾನು ॥ 5 ॥
ಧ್ರುವತಾಳ
ಸಿರಿ ನಾರಾಯಣಯೋಗಿ ಶ್ರೀಪಾದರಾಯರಲ್ಲಿ ವರವಿದ್ಯಾಭ್ಯಾಸವ ಮಾಡಿದೆ ನೀನು ಧರಿಯೊಳು ವಿಜಯೀಂದ್ರ ವಾದಿರಾಜರೆಂಬ ಪರಮಶಿಷ್ಯರ ಪಡೆದು ಮೆರದೆ ಕೀರುತಿಯಲ್ಲಿ ಸುರೇಂದ್ರರು ಪುತ್ರಭಿಕ್ಷವ ಬೇಡೆ ವಿಜೇಂದ್ರನ್ನ ಕರುಣಿಸಿ ಮಠವನುದ್ಧರಿಸಿದ ಕಾರಣ ಗುರುವ್ಯಾಸರಾಯರೆ ಪರಮ ಗುರುಗಳು ಕಾಣಿರೊ ಪುರಂದರವಿಠ್ಠಲ ಪರದೈವ ಜಗಕೆ ಗುರುವ್ಯಾಸರಾಯರೆ ಪರಮ ಗುರುಗಳು ಕಾಣಿರೊ ಪುರಂದರವಿಠ್ಠಲ ಪರದೈವ ಜಗಕೆ ॥ 6 ॥
ತ್ರಿವಿಡಿತಾಳ
ವರಮಧ್ವಮತವೆಂಬೊ ಸಾಗರದೊಳು ಅವ – ತರಿಸಿದೆ ಪೂರ್ಣ ಚಂದ್ರಮನಂತೆ ನೀನು ಧರಿಯೊಳು ಬ್ರಹ್ಮಣ್ಯರ ವರಕುವರನೆಂದೆನಿಸಿದೆ ನೀನು ಪುರಂದರವಿಠ್ಠಲನ್ನ ಕರುಣಾಕರ ಕರುಣವ ಪಡೆದೆ ಪುರಂದರವಿಠ್ಠಲನ್ನ ಕರುಣಾಕರ ಕರುಣವ ಪಡೆದೆ ॥ 7 ॥
ಅಟ್ಟತಾಳ
ಈಸು ಮುನಿಗಳು ಇದ್ದರೇನು ಮಾಡಿದರಯ್ಯ ವ್ಯಾಸರಾಯ ಮಧ್ವಮತವನುದ್ಧರಿಸಿದ ಕಾಶಿ ಗದಾಧರ ಮಿಶ್ರನ ಕೂಡ ವಾದವ ಮಾಡಿ ಸೋಲಿಸಿ ದಾಸನ್ನ ಮಾಡಿಕೊಂಡೆ ಧಾರುಣಿಯೊಳ ರಾಸಿಂಹ ಮಿಶ್ರನೆ ಯೋಗಿ ಮೊದಲಾದ ಪಕ್ಷ ಕಾಶೀ ಮಿಶ್ರ ಪಕ್ಷಧರ ವಾಜಿಪೇಯ ಲಿಂಗಣ್ಣನ ವಿ – ದ್ವಾಂಸರು ನೂರೆಂಟು ಮಂದಿ ಬರಲು ಜಯಿಸಿದೆ ಜಯಪತ್ರಿಕೆಯ ಕೊಂಡು ಮೆರೆದೆ ವಾಸುದೇವ ಗೋಪಾಲ ಕೃಷ್ಣಗೆ ವಿ – ಭೂಷಣವ ಮಾಡಿ ಹಾಕಿಸಿದೆ ಶ್ರೀಶ ಪುರಂದರವಿಠ್ಠಲನ್ನ ಈಶ ಬೊಮ್ಮ ಇಂದ್ರಾದಿಗಳಿಗೆ ಈಶನೆಂದು ಡಂಗುರವ ಪೊಯಿಸಿ ಮೆರೆದೆ ಜಗವರಿಯೆ ದಾಸರೊಳು ನೀ ಸಮರ್ಥನು ಸಂನ್ಯಾಸಿ ಶಿರೋಮಣಿ ॥ 8 ॥
ಆದಿತಾಳ
ಮಾನಸ ಪೂಜೆಯನು ನೀ ಮಾಡೆ ದಾನವಾಂತಕ ರಂಗನು ಮೆಚ್ಚೆ ತಾನೆ ಬಂದು ಗೋಪಾಲ ಕೃಷ್ಣ ಜ್ಞಾನಿಗಳರಸನೆ ಗುರುವ್ಯಾಸರಾಯ ಏನೆಂಬೆನು ನಿನ್ನ ಮಹಿಮೆಯನು ಶ್ರೀನಿವಾಸ ಪುರಂದರವಿಠ್ಠಲನ ಗಾನವ ಮಾಡುತ ಆಡುತ ಪಾಡುತ ಏನೆಂಬೆ ನಿಮ್ಮ ಮಹಿಮೆಯ ಮಾನವನಾವ ಬಲ್ಲನು ಏನೆಂಬೆ ನಿಮ್ಮ ಮಹಿಮೆಯ ಮಾನವನಾವ ಬಲ್ಲನು ॥ 9 ॥
guru upadesavillada jnanavu guru upadesavillada snanavu guru upadesavillada dhyanavu guru upadesavillada japavu guru upadesavillada tapavu guru upadesavillada mantra guru upadesavillada tantra uragana upavasadante kaniro guru vyasarayana karunadindali enage purandaraviththalane paranendaruhi duritabhayavella pariharisidanagi vara mahamantra upadesisidanagi vara mahamantra upadesisidanagi॥ 2॥
Recent Comments